Friday 14 December, 2007

ಗಾಳಿಪಟ ಹಾಡುಗಳ ವಿಮರ್ಷೆ

ಚಿತ್ರ: ಗಾಳಿಪಟ
ಒಟ್ಟು ಹಾಡುಗಳು: 6
ನಿರ್ದೇಶನ: ಯೋಗರಜ್ ಭಟ್
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಹೃದಯ ಶಿವ
ಪಾತ್ರವರ್ಗ: ಗಣೇಶ್, ಡೈಸಿ ಬೋಪಣ್ಣ, ರಾಜೇಶ್, ದಿಗಂತ್, ನೀತು, ಭಾವನಾ ರಾವ್, ಅನಂತ್ ನಾಗ್, ರಂಗಾಯಣ ರಘು

1. ಆಕಾಶ ಇಷ್ಟೇ ಯಾಕಿದೆಯೋ.. ನನ್ ನೈ ನನ ನೈ.. ಗಾಳಿಪಟ.. ಗಾಳಿಪಟ (ಟಿಪ್ಪು, ಕುನಾಲ್ ಗಂಜಾವಾಲ) : ಚಿತ್ರದ ಶೀರ್ಷಿಕೆ ಗೀತೆ... ಉತ್ತಮ ಹಿನ್ನೆಲೆ ಸಂಗೀತ ಮತ್ತು ಕೇಳಿದಾಕ್ಷಣ ಒಂದು ರೀತಿಯ ಸಂಚಲನವನ್ನುಂಟುಮಾಡುವ ಲಯ ಪ್ರಧಾನ ಗೀತೆ.

ಅಂಕ - 8/10

2. ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ....ಇನ್ನೆಲ್ಲಿ ನನಗೇ ಉಳಿಗಾಲ (ಪೂರ್ತಿ ಸಾಹಿತ್ಯ ಮೇಲೆ ಇದೆ.. ಓದಿ) - (ಸೋನು ನಿಗಂ) : ಇದಕ್ಕೆ ನಿಜವಾಗಿಯೂ ಹರಿಕೃಷ್ಣ ಅವರೇ ಸಂಗೀತ ಕೊಟ್ಟೀದ್ದೋ ಅಥವ ಹರಿಕೃಷ್ಣರ ಒಳಗೆ ಮನೋಮೂರ್ತಿ ಸೇರಿಕೊಂಡು ಈ ಗೀತೆಗೆ ಸಂಗೀತ ಒದಗಿಸಿದರೋ ಎಂಬ ಅನುಮಾನ! ಮತ್ತೊಂದು ಅನಿಸುತಿದೆ ಯಾಕೋ ಇಂದು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.. ಜಯಂತ್ ಕಾಯ್ಕಿಣಿಯವರೊಳಗಡಗಿರುವ ಸಾಹಿತ್ಯ ಬ್ರಹ್ಮ ಮತ್ತೊಮ್ಮೆ ಅವನ ಲೇಖನಿಯ ಮೂಲಕ ಅವತರಿಸಿದ್ದಾನೆ.. ಅಬ್ಬಬ್ಬಾ ಈ ಮನುಷ್ಯನಿಗೆ ಅದೆಲ್ಲಿಂದ ಸಿಗುತ್ತವೆ ಈ ರೀತಿಯ ಪದಗಳು.. ಸಾಹಿತ್ಯ? ಚಿತ್ರವೊಂದಕ್ಕ್ಕಾಗಿಯೇ ಬರೆದ ಹಾಡಾದರೂ ಎಷ್ಟೊಂದು ಅರ್ಥಗರ್ಭಿತವಾಗಿದೆ... ಜಯಂತ್ ನೀವು ಕನ್ನಡ ಚಿತ್ರರಂಗದ ಮಟ್ಟಗೆ ಸಧ್ಯಕ್ಕಂತೂ ಒಂದು ಆಸ್ತಿ..

ಇದು ಎಲ್ಲ ಹಾಡುಗಳಲ್ಲಿ ಅತ್ಯುತ್ತಮ.. ಇದನ್ನು ಬರೆಯುವ ಮೊದಲು ಕನಿಷ್ಟ ಹತ್ತು ಸಲವಾದರೂ ಈ ಹಾಡನ್ನು ಕೇಳಿದ್ದೇನೆ.. ಮತ್ತೂ ಇದರ ಗುಂಗು ಹೋಗಿಲ್ಲ... ಇನ್ನೆಲ್ಲಿ ನನಗೇ ಉಳಿಗಾಲ?


ಅಂಕ - 9.5/10

3. ಆಹಾ ಈ ಬೆದರು ಬೊಂಬೆ - (ಉದಿತ್ ನಾರಾಯಣ್, ಅನುರಾಧಾ ಶ್ರೀರಾಂ) : ಹಾಡಿನ ಆರಂಭಿಕ ಹಿನ್ನೆಲೆ ಸಂಗೀತ ಮತ್ತು ಮೊದಲ ಸಾಲು ಸೊಗಸಾಗಿದೆ.. ಆದರೆ ನಂತರದ ಸಾಲುಗಳು ಮತ್ತು ಚರಣ ಸುಮಾರಾಗಿದೆ ಅಷ್ಟೇ.. ಉದಿತ್ ಇನ್ನೂ ಸ್ವಲ್ಪ ಉತ್ತಮವಾಗಿ ಹಾಡಬಹುದಿತ್ತು.

ಅಂಕ - 7/10

4. ನಧೀಂಧೀಂ ತನನಾ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ(ಚಿತ್ರಾ) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು ಚಿತ್ರಾ ಸುಶ್ರ್ಯಾವ್ಯವಾಗಿ ಹಾಡಿದ್ದಾರೆ..ಅತ್ಯುತ್ತಮ ಸಾಹಿತ್ಯ.

ಅಂಕ - 9/10

5. ಕವಿತೆ (ವಿಜಯ್ ಪ್ರಕಾಶ್) :- Patho Song! ಕರುಣ ರಸ ಭರಿತ ಹಾಡು.. ಸಾಧಾರಣ.
ಅಂಕ - 6/10


6. ಜೀವ ಕಳೆವ (ಸೋನು ನಿಗಂ) - ಮಿಂಚಾಗಿ ನೀನು ಬರಲು ಧಾಟಿಯಲ್ಲೇ ಬರುವ ಹಾಡು.. ಸಾಹಿತ್ಯ ಯೋಗರಜ ಭಟ್ತರದ್ದು. ಆದರೆ ಇಲ್ಲಿ ಸೋನು ಹಲವಾರು ಕಡೆ ಉಚ್ಚಾರದಲ್ಲಿ ಎಡವಿದ್ದಾರೆ. ಅದೂ ಅಲ್ಲದೇ ಸಾಹಿತ್ರದಲ್ಲಿ ಬಳಸಿರುವ ಕೆಲವು ಪದಗಳು ಸಂಗೀತದೊಂದಿಗೆ ಅಷ್ಟಾಗಿ ಹೊಂದದೇ ಇರುವುದು ಗೊತ್ತಾಗುತ್ತದೆ.. ಹಿನ್ನೆಲೆ ಸಂಗೀತ ಮೊದಲ ಹಾಡಿನದ್ದೇ ಆಗಿರುವುದರಿಂದ ಕೇಳಲು ಬಹಳ ಇಂಪಾಗಿಯೇ ಇದೆ..

ಅಂಕ - 7/10


ಒಂದಂತೂ ಸತ್ಯ... ಮುಂಗಾರು ಮಳೆಯ ನಂತರ ಭಾರೀ ನಿರೀಕ್ಷೆಯಲ್ಲಿದ್ದ ಕೇಳುಗರಿಗೆ ಗಾಳಿಪಟಚಿತ್ರದ ಹಾಡುಗಳು ನಿರಾಸೆಯನ್ನಂತೂ ಖಂಡಿತಾ ಮಾಡುವುದಿಲ್ಲ. ಮುಂಗಾರು ಮಳೆ ಮುಂಗಾರು ಮಳೇಯೇ.. ಅದರೊಂದಿಗೆ ಹೋಲಿಸುವುದು ಬೇಡ... ಉತ್ತಮ ಸಂಗೀತ ಪ್ರಿಯರಿಗೆ ಇಲ್ಲಿ ಒಳ್ಳೆಯ ರಸದೌತಣವಂತೂ ಇದೆ.. ಸಾಹಿತ್ಯ ಪ್ರಿಯರಿಗೆ ಜಯಂತ್ ಸೊಗಸಾದ ಸಾಲುಗಳನ್ನು ಬರೆದಿದ್ದಾರೆ.. ಹರಿಕೃಷ್ಣ ಉತ್ತಮವಾಗಿ ಸಂಗೀತ ನೀಡಿದ್ದಾರೆ

GAALIPATA Song Rocking !

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ


ನಾ ನಿನ್ನ ಕನಸಿಗೆ ಚಂದಾದಾರನು... ಚಂದಾ ಬಾಕಿ ನೀಡಲು ಬಂದೇ ಬರವೆನು
ನಾ ನೇರ ಹೃದಯದ ವರದಿಗಾರನು...ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರೀ... ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು....

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡಾನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ... ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?

Monday 20 August, 2007

ಮಳೆ ನಿಂತು ಹೋದ ಮೇಲೆ..

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ


ನೋವಿನಲ್ಲಿ ಜೀವ ಜೀವ ಅರಿತ ನಂತರ.. ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ.. ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ ಕನಸೇ ಜೀವನ.. ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ.. ಕೇಳು ಜೀವವೇ ಏತಕೀ ಕಂಪನ
ಹೃದಯವೂ ಇಲ್ಲಿ ಕಳೆದು ಹೋಗಿದೆ.. ಹುಡುಕಲೇ ಬೇಕೇ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ

Wednesday 15 August, 2007

ಚಿತ್ರ - ಮಿಲನ
ತಾರಾಗಣ - ಪುನೀತ್, ಪಾರ್ವತಿ, ಪೂಜಾ(ಸಂಜನಾ) ಗಾಂಧಿ
ನಿರ್ದೇಶನ- ಪ್ರಕಾಶ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ. ನಾಗೇಂದ್ರ ಪ್ರಸಾದ್
ಗಾಯಕರು - ರಾಜೇಶ್ ಕೃಷ್ಣನ್, ಸೋನು ನಿಗಮ್,ಕುಮಾರ್ ಗಾಂಜಾವಾಲ, ಚೈತ್ರಾ, ಶ್ರೇಯಾ ಗೋಶಲ್, ಸುರೇಶ್ ಪೀಟರ್


1. ನಿನ್ನಿಂದಲೇ, ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ, ನಿನ್ನಿಂದಲೇ ಮನಸಿಂದು ಕುಣಿದಾಡಿದೆ...
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ, ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ, ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ.. ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ..
(ಸೋನು ನಿಗಂ) - ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಬಲು ಸೊಗಸಾಗಿದೆ. ಈ ಹಾಡು ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳಿವೆ... ಸೂಪರ್ ಸಾಂಗ್!!! 9/10

೨. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ.. ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಬನ್ನಿ ಕುಣಿಯೋಣ ಎಲ್ಲ, ಸೇರಿ ನಲಿಯೋಣ ಶುಭ ಕೋರಿ ಉಲ್ಲಾಸದಲ್ಲಿ ಈ ದಿನ,
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜತೆಗೂಡಿ ಎಲ್ಲೆಲ್ಲೂ ತಳಿರು ತೋರಣ - (ಶ್ರೇಯಾ ಗೋಶಲ್) - ಇಂಪಾದ ಹಾಡು. ಕೇಳಲು ಹಿತವಾಗಿದೆ. 7/10

೩. ಕಿವಿಮಾತೊಂದು ಹೇಳಲೇ ನಾನಿಂದು.. ದಾರಿ ನಿಂತಾಗ ಸಾಗಲೇ ಬೇಕೆಂದು.. ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ, ನೀನು ನೀನಾಗಿ ಬಾಳಲೇ ಬೇಕಿಂದು..
ಹಸಿರಾಗಿದೆ ದೀಪವು ನಿನಗಾಗಿ, ನಸುನಗುತಲೆ ಸಾಗು ನೀ ಗೆಲುವಾಗಿ, ಹೊಸ ತಂಗಾಳಿ ಹೇಳಿದೆ ಮೆಲುವಾಗಿ, ಈ ಬಾಳುಂಟು ಬಾಳುವ ಸಲುವಾಗಿ (ಕುನಾಲ್ ಗಂಜಾವಾಲ) - ಸಾಹಿತ್ಯ ಸೂಪರ್..

ಜಯಂತ್ ಕಾಯ್ಕಿಣಿ ತಾನು ಅದ್ಭುತ ಗೀತರಹನಕಾರನೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಾರೆ.. ಕುನಾಜ್ ಗಾಂಜಾವಾಲ ಕಂಥದಲ್ಲಿ ಹೊರಹೊಮ್ಮಿರುವ ಇದು ಕೂಡ ಉತ್ತಮ ಹಾಡು..
7.5/10

೪. ಮಳೆ ನಿಂತು ಹೋದ ಮೇಲೆ - ಶ್ರೇಯಾ ಗೋಶಲ್ ಈ ಹಾಡನ್ನು ಸೋನು ನಿಗಮ್ ಜೊತೆ ಒಮ್ಮೆ ಮತ್ತು ಒಬ್ಬಳೆ ಒಮ್ಮೆ ಹಾಡಿದ್ದು ಎರಡೂ ಬಾರಿಯೂ ಸೂಪರ್. ತುಂಬಾ ಮಧುರವಾದ ಹಾಡು.
9/10

೫. ಅಂತೂ ಇಂತೂ ಪ್ರೀತಿ ಬಂತು ಇಂದು ನವಿರಾದ ಮಳೆ ಬಿಲ್ಲಿನಂತೆ, ಅಂತೂ ಇಂತೂ ಪ್ರೀತಿ ಬಂತು ಒಂದು ಸೊಗಸಾದ ಸವಿ ಸೊಲ್ಲಿನಂತೆ. - ಉದಿತ್ ನಾರಾಯಣ್ ಮತ್ತು ಚಿತ್ರಾರವರ ಧ್ವನಿಯಲ್ಲಿ ಮೂಡಿರುವ ಇಂಪಾದ ಯುಗಳ ಗೀತೆ. Catchy Music..

8.5/10

೬. ಕದ್ದು ಕದ್ದು - (ಚೈತ್ರ, ಸುರೇಶ್ ಪೀಟರ್, ಪ್ರವೀಣ್ ದತ್ ಸ್ಟೀಫನ್ ) - ಐಟಂ ನಂಬರ್ ರೀತಿ ಇದ್ದು.. ಸಾಧಾರಣವಾದ ಹಾಡು. ಇಡೀ ಅಲ್ಭಂನಲ್ಲಿ ನನಗೆ ಅಷ್ಟಾಗಿ ಹಿಡಿಸದ ಹಾಡು ಇದೊಂದೇ..

5/10



My overall rating - 8/10

Friday 3 August, 2007

geleya audio review

ಗೆಳೆಯ
ತಾರಾಗಣ - ಪ್ರಜ್ವಲ್, ತರುಣ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್
ನಿರ್ದೇಶನ - ಹರ್ಷ

೧. ಈ ಸಂಜೆ ಯಾಕಾಗಿದೆ.. ನೀನಿಲ್ಲದೇ (ಸೋನು ನಿಗಮ್) - ಭಾವಪೂರ್ಣಭರಿತ ಅರ್ಥಗರ್ಭಿತ ಹಾಡು.

೨. ನನ್ನ ಸ್ಟೈಲು ಬೇರೇನೇ (ರಾಜೇಶ್ ಕೃಷ್ಣನ್, ಇಂಚರ) - ಫಾಸ್ಟ್ ನಂಬರ್. ಸುಮಾರಾಗಿದೆ. ಕವಿರಾಜ್ ಬರೆದಿರೋ ಹಾಡು
೩. ಹುಡುಗಿ ಮಳೆಬಿಲ್ಲು - (ಕಾರ್ತೀಕ್, ಪ್ರಿಯಾ ಹಿಮೇಶ್) - ಜಯಂತ್ ಕಾಯ್ಕಿಣಿ ಬರೆದಿರುವ ಈ ಯುಗಳ ಗೀತೆಗೆ ಮನೋಮೂರ್ತಿಯವರು ತುಂಬ ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ.

೪. ಕನಸಲ್ಲೇ ಮಾತಾಡುವೆ (ಶ್ರೇಯಾ ಗೋಶಲ್) - ಶ್ರೇಯಾ ಉತ್ತಮವಾಗಿ ಹಾಡಿದ್ದಾರೆ. One of my Fav. songs in this album. ಸಾಹಿತ್ಯವೂ ಸೂಪರ್!!

೫. ಪುಟಗಳ ನಡುವಿನ - (ಪ್ರವೀನ್ ದತ್ ಸ್ಟೀಫನ್) - ಕೇಳಲು ಭಾವಗೀತೆಯ ಮಾದರಿಯಲ್ಲಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಂದ ಮುಕ್ತವಾದ ಈ ಹಾಡು ತುಂಬ ಉಳಿದ ಹಾಡುಗಳಿಗಿಂತ ಭಿನ್ನವಾಗಿದೆ..

೬. ಚಾಂಗು ಭಲಾ ಚಾಂಗುರೇ - (ಶಂಕರ್ ಮಹಾದೇವನ್) - ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಐಟಂ ಸಾಂಗ್... ಬಾಲಿವುಡ್‍ನ ರಾಖೀ ಸಾವಂತ್ ಹೆಜ್ಜೆ ಹಾಕಿರುವ ಹಾಡು


ನನ್ನ ರೇಟಿಂಗ್ - 7/10

Saturday 28 July, 2007

One of my fav songs...

ಫಸ್ಟ್ ಟೈಂ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಂ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಂ ನಿನ್ನ ನಾ ನೋಡಿದಾಗ... ಮರ್ತೆನು ನನ್ನೆ ಮೆಲ್ಲ


ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ

ಸದ್ದೆ ಇಲ್ಲದೆ, ನಿದ್ದೆ ಇಲ್ಲದೆ ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ, ಮುದ್ದು ಮಾಡಿದೆ ಎದ್ದಾಗ ಎಲ್ಲಿ ಓಡಿದೆ

ಕನ್ನಡಿ ಮುಂದೆ ನಾ ನಿಂತರೂನೂ, ಕಾಣುವೆ ನಂಗೆ ನೀನು. || ಫಸ್ಟ್ ಟೈಂ ||

ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ

ಎಲ್ಲೆ ಇದ್ದರೂ, ಎಲ್ಲೆ ಹೋದರೂ ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ, ಒಲ್ಲೆ ಎಂದರೂ ಲಲ್ಲೆ ಗರೆದು ಮಲ್ಲೆ ಮುಡಿಸಿದೆ

ಕಂಡೆನೂ ನಿನ್ನನೇ ಟಿ.ವಿ.ಯಲ್ಲಿ... ಎಲ್ಲ ಚಾನೆಲ್ಲಿನಲ್ಲಿ... || ಫಸ್ಟ್ ಟೈಂ ||

Friday 27 July, 2007

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.

ಚಿತ್ರ ಅತ್ಯದ್ಭುತವಲ್ಲದಿದ್ದರೂ ಒಂದು ಉತ್ತಮ ಸಾಂಸಾರಿಕ ಚಿತ್ರವಾಗಿ ಮೂಡಿಬಂದಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಜೀವನದಲ್ಲಿ ನಡೆಯುವ ಸಂಘರ್ಷದ ಕಥೆಯನ್ನು ಸೀತಾರಾಂ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋಣ. ಮೀರಾ-ಮಾಧವ-ರಾಘವ ಮೂರು ಪಾತ್ರಗಳು. ಮೀರಾ (ರಮ್ಯಾ) ಮಧ್ಯಮ ವರ್ಗದ ಹುಡುಗಿ. ಈಕೆ ಗಾಯಕಿ ಕೂಡ. ಈಕೆಯನ್ನು ರಾಘವ ಎಂಬ ಶ್ರೀಮಂತ ರೌಡಿ (ತಿಲಕ್) ಇಷ್ಟಪಡುತ್ತಾನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಾನೆ. ಆದರೆ ರೌಡಿಗೆ ಮಗಳನ್ನು ಕೊಡಲೊಪ್ಪದ ಮೀರಾಳ ಹೆತ್ತವರು ಆಕೆಯ ಮದುವೆಯನ್ನು ಮಾಧವನೆಂಬ (ದಿಗಂತ್) ಕಾಲೇಜು ಉಪನ್ಯಾಸಕನ ಜೊತೆ ನಡೆಸುತ್ತಾರೆ. ಬಡಕುಟುಂಬಕ್ಕೆ ಸೇರಿದ ಮಾಧವನಿಗೆ ಐ.ಎ.ಎಸ್. ಅಧಿಕಾರಿಯಾಗುವ ಆಸೆ. ಆದರೆ ಆರ್ಥಿಕವಾಗಿ ಸಶಕ್ತನಾಗಿರದ ಕಾರಣ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಹೀಗಿರುವಾಗ ಗಂಡನ ಐ.ಎ.ಎಸ್. ಆಸೆಯನ್ನು ಪೂರೈಸಲು ಬಯಸುವ ಮೀರಾ ಅನಿವಾರ್ಯ ಕಾರಣಗಳಿಂದ ರಾಘವನ ಬಳಿ ೧೦ ಲಕ್ಷ ಸಾಲ ಪಡೆಯುತ್ತಾಳೆ. ಸಾಲ ಮಾಡಲು ವಿರೋಧಿಯಾಗಿರುವ ಮಾಧವನಲ್ಲಿ ಈ ವಿಚಾರವನ್ನು ಮುಚ್ಚಿಡುತ್ತಾಳೆ. ಇಲ್ಲಿಂದ ಮೀರಾಳ ಬದುಕಿನಲ್ಲಿ ಮತ್ತೊಮ್ಮೆ ರಾಘವನ ಪ್ರವೇಶವಾಗುತ್ತದೆ. ಮೀರಾಳ ಸುಂದರ ಜೀವನದಲ್ಲಿ ಆತಂಕದ ಬಿರುಗಾಳಿಯೇಳುತ್ತದೆ. ತನ್ನ ಜೀವನದಲ್ಲಿ ತಲೆದೋರುವ ಈ ಸಂಕಟಗಳನ್ನು ಮೀರಾ ಹೇಗೆ ಎದುರಿಸುತ್ತಾಳೆ... ಮಾಧವನಿಗೆ ಸತ್ಯದ ಅರಿವಾದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ... ಎಂಬುದನ್ನು ಸೀತಾರಾಂ ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ.

ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಗಳ ಜವಾಬ್ದಾರಿಯನ್ನೂ ಸೀತಾರಾಂರವರೇ ನಿಭಾಯಿಸಿದ್ದಾರೆ. ಸಂಭಾಷಣೆಯಲ್ಲಿ ಸೀತಾರಾಂ ಮಿಂಚಿದ್ದಾರೆ. ಚಿತ್ರಕಥೆ ಬಿಗುವಾಗಿದ್ದು ಎಲ್ಲಿಯೂ ಹಳಿತಪ್ಪದಂತೆ ಸೀತಾರಾಂ ಎಚ್ಚರವಹಿಸಿದ್ದಾರೆ. ಆದರೂ ಕೆಲವೊಂದು ಕಡೆಗಳಲ್ಲಿ ಸ್ವಲ್ಪ ಎಳೆದಂತೆ ಕಂಡುಬಂದು ಬೇಸರತರಿಸುತ್ತದೆ. ಹಾಸ್ಯದ ಸನ್ನಿವೇಶಗಳೇ ವಿರಳ.. ಇರುವ ಕಡೆಗಳಲ್ಲೂ ಹಾಸ್ಯ ಅಂತಹ ನಗುವನ್ನೇನೂ ತರಿಸುವುದಿಲ್ಲ. ಒಂದೆರಡು ಸನ್ನಿವೇಶಗಳು, ಸಂಭಾಷಣೆಗಳಲ್ಲಿ ಸೀತಾರಾಂ ಪ್ರಯತ್ನ ಸಾಲದು.ಇನ್ನಷ್ಟು ಉತ್ತಮವಾಗಿ ತೆಗೆಯಬಹುದಾಗಿತ್ತು ಎಂದು ಅನಿಸಿದರೆ ಆಶ್ಚರ್ಯವಿಲ್ಲ.

ತಮ್ಮ ಇಂಪಾದ ಸಂಗೀತ-ಸಾಹಿತ್ಯದಿಂದ ಹಂಸಲೇಖಾ ಚಿತ್ರಕ್ಕೆ ಇನ್ನಷ್ಟು ಮೆರುಗನ್ನು ಕೊಟ್ಟಿದ್ದಾರೆ. ಹಾಡುಗಳ ಚಿತ್ರೀಕರಣವೂ ಪರವಾಗಿಲ್ಲ. ಹಿನ್ನೆಲೆ ಗಾಯಕಿಯರು ನಿಜವಾಗಿಯೂ ಉತ್ತಮವಾಗಿ ಹಾಡಿದ್ದಾರೆ.

ಅಭಿನಯದಲ್ಲಿ ರಮ್ಯಾ ಮಿಂಚಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಮ್ಯಾ ಸಮರ್ಥವಾಗಿ ಅಭಿನಯಿಸಿದ್ದಾರೆ. ದಿಗಂತ್ ಅಭಿನಯದಲ್ಲಿ ಇನ್ನೂ ಪಳಗಬೇಕು. ಸಹ ಕಲಾವಿದರಾದ ಸುಧಾ ಬೆಳವಾಡಿ, ಸೀತಾ ಕೋಟೆ, ಮಾಸ್ಟರ್ ಆನಂದ್, ಹರಿಣಿ, ಮಂಡ್ಯ ರಮೇಶ್, ಜಯಶ್ರೀ ಎಲ್ಲರೂ ತಮಗಿರುವ ಅಲ್ಪಾವಕಾಶದಲ್ಲಿಯೇ ಸಹಜವಾಗಿ ನಟಿಸಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಿದ್ದಾರೆ. ಬಹುತೇಕ ಎಲ್ಲರೂ ಕಿರುತೆರೆಯ ಕಲಾವಿದರುಗಳೆ ಅಭಿನಯಿಸಿರುವುದು ಇನ್ನೊಂದು ವಿಶೇಷ. ಆದರೆ ಚಿತ್ರದ ನಿಜವಾದ ನಾಯಕ ನಮ್ಮ ರಾಘವನೆಂದರೆ ತಪ್ಪಾಗಲಾರದು. ತಿಲಕ್ ಅಭಿನಯದ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ಖಳನಾಯಕನಾಗಿದ್ದರೂ ಚಿತ್ರದ ಅಂತ್ಯದಲ್ಲಿ ನಿಮಗೆ ಇಷ್ಟವಾಗುವುದು ರಾಘವನೇ ಹೊರತು ಮಾಧವನಲ್ಲ. ತಮ್ಮ ಹಾವ ಭಾವ, ಸಂಭಾಷಣೆಯೊನ್ನೊಪ್ಪಿಸುವ ರೀತಿಗಳಿಂದ ಇಡೀ ಚಿತ್ರವನ್ನು ಆವರಿಸಿ ಬಿಡುತ್ತಾರೆ.. ಮೀರಾ ರಾಘವನಿಗೇ ಸಿಗಬಾರದಿತ್ತೇ ಎಂಬಷ್ಟರ ಮಟ್ಟಿಗೆ ರಾಘವನ ಪಾತ್ರ ಆಪ್ತವಾಗಿಬಿಡುತ್ತದೆ. HATS OFF TILAK. ಕನ್ನಡಕ್ಕೆ ಮತ್ತೊಬ್ಬ ಯೋಗ್ಯ ನಟನ ಸೇರ್ಪಡೆಯಾಗಿದೆ.


ಒಟ್ಟಿನಲ್ಲಿ ಇದೊಂದು ಸದಭಿರುಚಿಯ, ಯಾವುದೇ ಅಶ್ಲೀಲತೆ, ಹಿಂಸೆ, ರಕ್ತಪಾತಗಳಿಲ್ಲದ ಸುಂದರ ಸಾಂಸಾರಿಕ ಚಿತ್ರ. ಆದರೆ ಇದನ್ನು ಗೆಲ್ಲಿಸಬೇಕಾದರೆ ಮನೆಗಳಲ್ಲಿ ದೈನಂದಿನ ಧಾರಾವಾಹಿಗಳಿಗೆ ಅಂಟಿಕೊಂಡಿರುವ ಮಹಿಳಾ ಮಣಿಗಳು ಮತ್ತು ಕುಟುಂಬಗಳು ಥಿಯೇಟರ್ ಕಡೆಗೆ ಪಯಣಿಸಬೇಕು. ಮಾಸ್ ಚಿತ್ರಪ್ರಿಯರಿಗೆ ಚಿತ್ರ ಇಷ್ಟವಾಗದೇ ಇರಬಹುದು. ಆದರೂ ಇದು ನಮ್ಮ ಚಿತ್ರ. ಕಲಾವಿದರೆಲ್ಲರೂ ನಮ್ಮವರು. ಇಂತಹ ಚಿತ್ರ ಗೆಲ್ಲಬೇಕು. ಗೆಲ್ಲಿಸುವ ಹೊಣೆ ನಮ್ಮೆಲ್ಲ ಕನ್ನಡಿಗರದ್ದು.