Monday 20 August, 2007

ಮಳೆ ನಿಂತು ಹೋದ ಮೇಲೆ..

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ


ನೋವಿನಲ್ಲಿ ಜೀವ ಜೀವ ಅರಿತ ನಂತರ.. ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ.. ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ ಕನಸೇ ಜೀವನ.. ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ.. ಕೇಳು ಜೀವವೇ ಏತಕೀ ಕಂಪನ
ಹೃದಯವೂ ಇಲ್ಲಿ ಕಳೆದು ಹೋಗಿದೆ.. ಹುಡುಕಲೇ ಬೇಕೇ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದು ಹೋಗಿದೆ.. ಹೇಳಲಿ ಹೇಗೆ ತಿಳಿಯದಾಗಿದೆ

Wednesday 15 August, 2007

ಚಿತ್ರ - ಮಿಲನ
ತಾರಾಗಣ - ಪುನೀತ್, ಪಾರ್ವತಿ, ಪೂಜಾ(ಸಂಜನಾ) ಗಾಂಧಿ
ನಿರ್ದೇಶನ- ಪ್ರಕಾಶ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ. ನಾಗೇಂದ್ರ ಪ್ರಸಾದ್
ಗಾಯಕರು - ರಾಜೇಶ್ ಕೃಷ್ಣನ್, ಸೋನು ನಿಗಮ್,ಕುಮಾರ್ ಗಾಂಜಾವಾಲ, ಚೈತ್ರಾ, ಶ್ರೇಯಾ ಗೋಶಲ್, ಸುರೇಶ್ ಪೀಟರ್


1. ನಿನ್ನಿಂದಲೇ, ನಿನ್ನಿಂದಲೇ ಕನಸೊಂದು ಶುರುವಾಗಿದೆ, ನಿನ್ನಿಂದಲೇ, ನಿನ್ನಿಂದಲೇ ಮನಸಿಂದು ಕುಣಿದಾಡಿದೆ...
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ, ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ, ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ.. ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ..
(ಸೋನು ನಿಗಂ) - ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಬಲು ಸೊಗಸಾಗಿದೆ. ಈ ಹಾಡು ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳಿವೆ... ಸೂಪರ್ ಸಾಂಗ್!!! 9/10

೨. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ.. ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಬನ್ನಿ ಕುಣಿಯೋಣ ಎಲ್ಲ, ಸೇರಿ ನಲಿಯೋಣ ಶುಭ ಕೋರಿ ಉಲ್ಲಾಸದಲ್ಲಿ ಈ ದಿನ,
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜತೆಗೂಡಿ ಎಲ್ಲೆಲ್ಲೂ ತಳಿರು ತೋರಣ - (ಶ್ರೇಯಾ ಗೋಶಲ್) - ಇಂಪಾದ ಹಾಡು. ಕೇಳಲು ಹಿತವಾಗಿದೆ. 7/10

೩. ಕಿವಿಮಾತೊಂದು ಹೇಳಲೇ ನಾನಿಂದು.. ದಾರಿ ನಿಂತಾಗ ಸಾಗಲೇ ಬೇಕೆಂದು.. ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ, ನೀನು ನೀನಾಗಿ ಬಾಳಲೇ ಬೇಕಿಂದು..
ಹಸಿರಾಗಿದೆ ದೀಪವು ನಿನಗಾಗಿ, ನಸುನಗುತಲೆ ಸಾಗು ನೀ ಗೆಲುವಾಗಿ, ಹೊಸ ತಂಗಾಳಿ ಹೇಳಿದೆ ಮೆಲುವಾಗಿ, ಈ ಬಾಳುಂಟು ಬಾಳುವ ಸಲುವಾಗಿ (ಕುನಾಲ್ ಗಂಜಾವಾಲ) - ಸಾಹಿತ್ಯ ಸೂಪರ್..

ಜಯಂತ್ ಕಾಯ್ಕಿಣಿ ತಾನು ಅದ್ಭುತ ಗೀತರಹನಕಾರನೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಾರೆ.. ಕುನಾಜ್ ಗಾಂಜಾವಾಲ ಕಂಥದಲ್ಲಿ ಹೊರಹೊಮ್ಮಿರುವ ಇದು ಕೂಡ ಉತ್ತಮ ಹಾಡು..
7.5/10

೪. ಮಳೆ ನಿಂತು ಹೋದ ಮೇಲೆ - ಶ್ರೇಯಾ ಗೋಶಲ್ ಈ ಹಾಡನ್ನು ಸೋನು ನಿಗಮ್ ಜೊತೆ ಒಮ್ಮೆ ಮತ್ತು ಒಬ್ಬಳೆ ಒಮ್ಮೆ ಹಾಡಿದ್ದು ಎರಡೂ ಬಾರಿಯೂ ಸೂಪರ್. ತುಂಬಾ ಮಧುರವಾದ ಹಾಡು.
9/10

೫. ಅಂತೂ ಇಂತೂ ಪ್ರೀತಿ ಬಂತು ಇಂದು ನವಿರಾದ ಮಳೆ ಬಿಲ್ಲಿನಂತೆ, ಅಂತೂ ಇಂತೂ ಪ್ರೀತಿ ಬಂತು ಒಂದು ಸೊಗಸಾದ ಸವಿ ಸೊಲ್ಲಿನಂತೆ. - ಉದಿತ್ ನಾರಾಯಣ್ ಮತ್ತು ಚಿತ್ರಾರವರ ಧ್ವನಿಯಲ್ಲಿ ಮೂಡಿರುವ ಇಂಪಾದ ಯುಗಳ ಗೀತೆ. Catchy Music..

8.5/10

೬. ಕದ್ದು ಕದ್ದು - (ಚೈತ್ರ, ಸುರೇಶ್ ಪೀಟರ್, ಪ್ರವೀಣ್ ದತ್ ಸ್ಟೀಫನ್ ) - ಐಟಂ ನಂಬರ್ ರೀತಿ ಇದ್ದು.. ಸಾಧಾರಣವಾದ ಹಾಡು. ಇಡೀ ಅಲ್ಭಂನಲ್ಲಿ ನನಗೆ ಅಷ್ಟಾಗಿ ಹಿಡಿಸದ ಹಾಡು ಇದೊಂದೇ..

5/10



My overall rating - 8/10

Friday 3 August, 2007

geleya audio review

ಗೆಳೆಯ
ತಾರಾಗಣ - ಪ್ರಜ್ವಲ್, ತರುಣ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್
ನಿರ್ದೇಶನ - ಹರ್ಷ

೧. ಈ ಸಂಜೆ ಯಾಕಾಗಿದೆ.. ನೀನಿಲ್ಲದೇ (ಸೋನು ನಿಗಮ್) - ಭಾವಪೂರ್ಣಭರಿತ ಅರ್ಥಗರ್ಭಿತ ಹಾಡು.

೨. ನನ್ನ ಸ್ಟೈಲು ಬೇರೇನೇ (ರಾಜೇಶ್ ಕೃಷ್ಣನ್, ಇಂಚರ) - ಫಾಸ್ಟ್ ನಂಬರ್. ಸುಮಾರಾಗಿದೆ. ಕವಿರಾಜ್ ಬರೆದಿರೋ ಹಾಡು
೩. ಹುಡುಗಿ ಮಳೆಬಿಲ್ಲು - (ಕಾರ್ತೀಕ್, ಪ್ರಿಯಾ ಹಿಮೇಶ್) - ಜಯಂತ್ ಕಾಯ್ಕಿಣಿ ಬರೆದಿರುವ ಈ ಯುಗಳ ಗೀತೆಗೆ ಮನೋಮೂರ್ತಿಯವರು ತುಂಬ ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ.

೪. ಕನಸಲ್ಲೇ ಮಾತಾಡುವೆ (ಶ್ರೇಯಾ ಗೋಶಲ್) - ಶ್ರೇಯಾ ಉತ್ತಮವಾಗಿ ಹಾಡಿದ್ದಾರೆ. One of my Fav. songs in this album. ಸಾಹಿತ್ಯವೂ ಸೂಪರ್!!

೫. ಪುಟಗಳ ನಡುವಿನ - (ಪ್ರವೀನ್ ದತ್ ಸ್ಟೀಫನ್) - ಕೇಳಲು ಭಾವಗೀತೆಯ ಮಾದರಿಯಲ್ಲಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಂದ ಮುಕ್ತವಾದ ಈ ಹಾಡು ತುಂಬ ಉಳಿದ ಹಾಡುಗಳಿಗಿಂತ ಭಿನ್ನವಾಗಿದೆ..

೬. ಚಾಂಗು ಭಲಾ ಚಾಂಗುರೇ - (ಶಂಕರ್ ಮಹಾದೇವನ್) - ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಐಟಂ ಸಾಂಗ್... ಬಾಲಿವುಡ್‍ನ ರಾಖೀ ಸಾವಂತ್ ಹೆಜ್ಜೆ ಹಾಕಿರುವ ಹಾಡು


ನನ್ನ ರೇಟಿಂಗ್ - 7/10