Friday 3 August, 2007

geleya audio review

ಗೆಳೆಯ
ತಾರಾಗಣ - ಪ್ರಜ್ವಲ್, ತರುಣ್
ಸಂಗೀತ - ಮನೋಮೂರ್ತಿ
ಸಾಹಿತ್ಯ - ಜಯಂತ್ ಕಾಯ್ಕಿಣಿ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್
ನಿರ್ದೇಶನ - ಹರ್ಷ

೧. ಈ ಸಂಜೆ ಯಾಕಾಗಿದೆ.. ನೀನಿಲ್ಲದೇ (ಸೋನು ನಿಗಮ್) - ಭಾವಪೂರ್ಣಭರಿತ ಅರ್ಥಗರ್ಭಿತ ಹಾಡು.

೨. ನನ್ನ ಸ್ಟೈಲು ಬೇರೇನೇ (ರಾಜೇಶ್ ಕೃಷ್ಣನ್, ಇಂಚರ) - ಫಾಸ್ಟ್ ನಂಬರ್. ಸುಮಾರಾಗಿದೆ. ಕವಿರಾಜ್ ಬರೆದಿರೋ ಹಾಡು
೩. ಹುಡುಗಿ ಮಳೆಬಿಲ್ಲು - (ಕಾರ್ತೀಕ್, ಪ್ರಿಯಾ ಹಿಮೇಶ್) - ಜಯಂತ್ ಕಾಯ್ಕಿಣಿ ಬರೆದಿರುವ ಈ ಯುಗಳ ಗೀತೆಗೆ ಮನೋಮೂರ್ತಿಯವರು ತುಂಬ ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ.

೪. ಕನಸಲ್ಲೇ ಮಾತಾಡುವೆ (ಶ್ರೇಯಾ ಗೋಶಲ್) - ಶ್ರೇಯಾ ಉತ್ತಮವಾಗಿ ಹಾಡಿದ್ದಾರೆ. One of my Fav. songs in this album. ಸಾಹಿತ್ಯವೂ ಸೂಪರ್!!

೫. ಪುಟಗಳ ನಡುವಿನ - (ಪ್ರವೀನ್ ದತ್ ಸ್ಟೀಫನ್) - ಕೇಳಲು ಭಾವಗೀತೆಯ ಮಾದರಿಯಲ್ಲಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಂದ ಮುಕ್ತವಾದ ಈ ಹಾಡು ತುಂಬ ಉಳಿದ ಹಾಡುಗಳಿಗಿಂತ ಭಿನ್ನವಾಗಿದೆ..

೬. ಚಾಂಗು ಭಲಾ ಚಾಂಗುರೇ - (ಶಂಕರ್ ಮಹಾದೇವನ್) - ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಐಟಂ ಸಾಂಗ್... ಬಾಲಿವುಡ್‍ನ ರಾಖೀ ಸಾವಂತ್ ಹೆಜ್ಜೆ ಹಾಕಿರುವ ಹಾಡು


ನನ್ನ ರೇಟಿಂಗ್ - 7/10

No comments: