Friday 14 December, 2007

ಗಾಳಿಪಟ ಹಾಡುಗಳ ವಿಮರ್ಷೆ

ಚಿತ್ರ: ಗಾಳಿಪಟ
ಒಟ್ಟು ಹಾಡುಗಳು: 6
ನಿರ್ದೇಶನ: ಯೋಗರಜ್ ಭಟ್
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಹೃದಯ ಶಿವ
ಪಾತ್ರವರ್ಗ: ಗಣೇಶ್, ಡೈಸಿ ಬೋಪಣ್ಣ, ರಾಜೇಶ್, ದಿಗಂತ್, ನೀತು, ಭಾವನಾ ರಾವ್, ಅನಂತ್ ನಾಗ್, ರಂಗಾಯಣ ರಘು

1. ಆಕಾಶ ಇಷ್ಟೇ ಯಾಕಿದೆಯೋ.. ನನ್ ನೈ ನನ ನೈ.. ಗಾಳಿಪಟ.. ಗಾಳಿಪಟ (ಟಿಪ್ಪು, ಕುನಾಲ್ ಗಂಜಾವಾಲ) : ಚಿತ್ರದ ಶೀರ್ಷಿಕೆ ಗೀತೆ... ಉತ್ತಮ ಹಿನ್ನೆಲೆ ಸಂಗೀತ ಮತ್ತು ಕೇಳಿದಾಕ್ಷಣ ಒಂದು ರೀತಿಯ ಸಂಚಲನವನ್ನುಂಟುಮಾಡುವ ಲಯ ಪ್ರಧಾನ ಗೀತೆ.

ಅಂಕ - 8/10

2. ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ....ಇನ್ನೆಲ್ಲಿ ನನಗೇ ಉಳಿಗಾಲ (ಪೂರ್ತಿ ಸಾಹಿತ್ಯ ಮೇಲೆ ಇದೆ.. ಓದಿ) - (ಸೋನು ನಿಗಂ) : ಇದಕ್ಕೆ ನಿಜವಾಗಿಯೂ ಹರಿಕೃಷ್ಣ ಅವರೇ ಸಂಗೀತ ಕೊಟ್ಟೀದ್ದೋ ಅಥವ ಹರಿಕೃಷ್ಣರ ಒಳಗೆ ಮನೋಮೂರ್ತಿ ಸೇರಿಕೊಂಡು ಈ ಗೀತೆಗೆ ಸಂಗೀತ ಒದಗಿಸಿದರೋ ಎಂಬ ಅನುಮಾನ! ಮತ್ತೊಂದು ಅನಿಸುತಿದೆ ಯಾಕೋ ಇಂದು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.. ಜಯಂತ್ ಕಾಯ್ಕಿಣಿಯವರೊಳಗಡಗಿರುವ ಸಾಹಿತ್ಯ ಬ್ರಹ್ಮ ಮತ್ತೊಮ್ಮೆ ಅವನ ಲೇಖನಿಯ ಮೂಲಕ ಅವತರಿಸಿದ್ದಾನೆ.. ಅಬ್ಬಬ್ಬಾ ಈ ಮನುಷ್ಯನಿಗೆ ಅದೆಲ್ಲಿಂದ ಸಿಗುತ್ತವೆ ಈ ರೀತಿಯ ಪದಗಳು.. ಸಾಹಿತ್ಯ? ಚಿತ್ರವೊಂದಕ್ಕ್ಕಾಗಿಯೇ ಬರೆದ ಹಾಡಾದರೂ ಎಷ್ಟೊಂದು ಅರ್ಥಗರ್ಭಿತವಾಗಿದೆ... ಜಯಂತ್ ನೀವು ಕನ್ನಡ ಚಿತ್ರರಂಗದ ಮಟ್ಟಗೆ ಸಧ್ಯಕ್ಕಂತೂ ಒಂದು ಆಸ್ತಿ..

ಇದು ಎಲ್ಲ ಹಾಡುಗಳಲ್ಲಿ ಅತ್ಯುತ್ತಮ.. ಇದನ್ನು ಬರೆಯುವ ಮೊದಲು ಕನಿಷ್ಟ ಹತ್ತು ಸಲವಾದರೂ ಈ ಹಾಡನ್ನು ಕೇಳಿದ್ದೇನೆ.. ಮತ್ತೂ ಇದರ ಗುಂಗು ಹೋಗಿಲ್ಲ... ಇನ್ನೆಲ್ಲಿ ನನಗೇ ಉಳಿಗಾಲ?


ಅಂಕ - 9.5/10

3. ಆಹಾ ಈ ಬೆದರು ಬೊಂಬೆ - (ಉದಿತ್ ನಾರಾಯಣ್, ಅನುರಾಧಾ ಶ್ರೀರಾಂ) : ಹಾಡಿನ ಆರಂಭಿಕ ಹಿನ್ನೆಲೆ ಸಂಗೀತ ಮತ್ತು ಮೊದಲ ಸಾಲು ಸೊಗಸಾಗಿದೆ.. ಆದರೆ ನಂತರದ ಸಾಲುಗಳು ಮತ್ತು ಚರಣ ಸುಮಾರಾಗಿದೆ ಅಷ್ಟೇ.. ಉದಿತ್ ಇನ್ನೂ ಸ್ವಲ್ಪ ಉತ್ತಮವಾಗಿ ಹಾಡಬಹುದಿತ್ತು.

ಅಂಕ - 7/10

4. ನಧೀಂಧೀಂ ತನನಾ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ(ಚಿತ್ರಾ) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು ಚಿತ್ರಾ ಸುಶ್ರ್ಯಾವ್ಯವಾಗಿ ಹಾಡಿದ್ದಾರೆ..ಅತ್ಯುತ್ತಮ ಸಾಹಿತ್ಯ.

ಅಂಕ - 9/10

5. ಕವಿತೆ (ವಿಜಯ್ ಪ್ರಕಾಶ್) :- Patho Song! ಕರುಣ ರಸ ಭರಿತ ಹಾಡು.. ಸಾಧಾರಣ.
ಅಂಕ - 6/10


6. ಜೀವ ಕಳೆವ (ಸೋನು ನಿಗಂ) - ಮಿಂಚಾಗಿ ನೀನು ಬರಲು ಧಾಟಿಯಲ್ಲೇ ಬರುವ ಹಾಡು.. ಸಾಹಿತ್ಯ ಯೋಗರಜ ಭಟ್ತರದ್ದು. ಆದರೆ ಇಲ್ಲಿ ಸೋನು ಹಲವಾರು ಕಡೆ ಉಚ್ಚಾರದಲ್ಲಿ ಎಡವಿದ್ದಾರೆ. ಅದೂ ಅಲ್ಲದೇ ಸಾಹಿತ್ರದಲ್ಲಿ ಬಳಸಿರುವ ಕೆಲವು ಪದಗಳು ಸಂಗೀತದೊಂದಿಗೆ ಅಷ್ಟಾಗಿ ಹೊಂದದೇ ಇರುವುದು ಗೊತ್ತಾಗುತ್ತದೆ.. ಹಿನ್ನೆಲೆ ಸಂಗೀತ ಮೊದಲ ಹಾಡಿನದ್ದೇ ಆಗಿರುವುದರಿಂದ ಕೇಳಲು ಬಹಳ ಇಂಪಾಗಿಯೇ ಇದೆ..

ಅಂಕ - 7/10


ಒಂದಂತೂ ಸತ್ಯ... ಮುಂಗಾರು ಮಳೆಯ ನಂತರ ಭಾರೀ ನಿರೀಕ್ಷೆಯಲ್ಲಿದ್ದ ಕೇಳುಗರಿಗೆ ಗಾಳಿಪಟಚಿತ್ರದ ಹಾಡುಗಳು ನಿರಾಸೆಯನ್ನಂತೂ ಖಂಡಿತಾ ಮಾಡುವುದಿಲ್ಲ. ಮುಂಗಾರು ಮಳೆ ಮುಂಗಾರು ಮಳೇಯೇ.. ಅದರೊಂದಿಗೆ ಹೋಲಿಸುವುದು ಬೇಡ... ಉತ್ತಮ ಸಂಗೀತ ಪ್ರಿಯರಿಗೆ ಇಲ್ಲಿ ಒಳ್ಳೆಯ ರಸದೌತಣವಂತೂ ಇದೆ.. ಸಾಹಿತ್ಯ ಪ್ರಿಯರಿಗೆ ಜಯಂತ್ ಸೊಗಸಾದ ಸಾಲುಗಳನ್ನು ಬರೆದಿದ್ದಾರೆ.. ಹರಿಕೃಷ್ಣ ಉತ್ತಮವಾಗಿ ಸಂಗೀತ ನೀಡಿದ್ದಾರೆ

GAALIPATA Song Rocking !

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ


ನಾ ನಿನ್ನ ಕನಸಿಗೆ ಚಂದಾದಾರನು... ಚಂದಾ ಬಾಕಿ ನೀಡಲು ಬಂದೇ ಬರವೆನು
ನಾ ನೇರ ಹೃದಯದ ವರದಿಗಾರನು...ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
ಕ್ಷಮಿಸು ನೀ ಕಿನ್ನರೀ... ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು....

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡಾನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ... ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ...?