Friday 14 December, 2007

ಗಾಳಿಪಟ ಹಾಡುಗಳ ವಿಮರ್ಷೆ

ಚಿತ್ರ: ಗಾಳಿಪಟ
ಒಟ್ಟು ಹಾಡುಗಳು: 6
ನಿರ್ದೇಶನ: ಯೋಗರಜ್ ಭಟ್
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಹೃದಯ ಶಿವ
ಪಾತ್ರವರ್ಗ: ಗಣೇಶ್, ಡೈಸಿ ಬೋಪಣ್ಣ, ರಾಜೇಶ್, ದಿಗಂತ್, ನೀತು, ಭಾವನಾ ರಾವ್, ಅನಂತ್ ನಾಗ್, ರಂಗಾಯಣ ರಘು

1. ಆಕಾಶ ಇಷ್ಟೇ ಯಾಕಿದೆಯೋ.. ನನ್ ನೈ ನನ ನೈ.. ಗಾಳಿಪಟ.. ಗಾಳಿಪಟ (ಟಿಪ್ಪು, ಕುನಾಲ್ ಗಂಜಾವಾಲ) : ಚಿತ್ರದ ಶೀರ್ಷಿಕೆ ಗೀತೆ... ಉತ್ತಮ ಹಿನ್ನೆಲೆ ಸಂಗೀತ ಮತ್ತು ಕೇಳಿದಾಕ್ಷಣ ಒಂದು ರೀತಿಯ ಸಂಚಲನವನ್ನುಂಟುಮಾಡುವ ಲಯ ಪ್ರಧಾನ ಗೀತೆ.

ಅಂಕ - 8/10

2. ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ....ಇನ್ನೆಲ್ಲಿ ನನಗೇ ಉಳಿಗಾಲ (ಪೂರ್ತಿ ಸಾಹಿತ್ಯ ಮೇಲೆ ಇದೆ.. ಓದಿ) - (ಸೋನು ನಿಗಂ) : ಇದಕ್ಕೆ ನಿಜವಾಗಿಯೂ ಹರಿಕೃಷ್ಣ ಅವರೇ ಸಂಗೀತ ಕೊಟ್ಟೀದ್ದೋ ಅಥವ ಹರಿಕೃಷ್ಣರ ಒಳಗೆ ಮನೋಮೂರ್ತಿ ಸೇರಿಕೊಂಡು ಈ ಗೀತೆಗೆ ಸಂಗೀತ ಒದಗಿಸಿದರೋ ಎಂಬ ಅನುಮಾನ! ಮತ್ತೊಂದು ಅನಿಸುತಿದೆ ಯಾಕೋ ಇಂದು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.. ಜಯಂತ್ ಕಾಯ್ಕಿಣಿಯವರೊಳಗಡಗಿರುವ ಸಾಹಿತ್ಯ ಬ್ರಹ್ಮ ಮತ್ತೊಮ್ಮೆ ಅವನ ಲೇಖನಿಯ ಮೂಲಕ ಅವತರಿಸಿದ್ದಾನೆ.. ಅಬ್ಬಬ್ಬಾ ಈ ಮನುಷ್ಯನಿಗೆ ಅದೆಲ್ಲಿಂದ ಸಿಗುತ್ತವೆ ಈ ರೀತಿಯ ಪದಗಳು.. ಸಾಹಿತ್ಯ? ಚಿತ್ರವೊಂದಕ್ಕ್ಕಾಗಿಯೇ ಬರೆದ ಹಾಡಾದರೂ ಎಷ್ಟೊಂದು ಅರ್ಥಗರ್ಭಿತವಾಗಿದೆ... ಜಯಂತ್ ನೀವು ಕನ್ನಡ ಚಿತ್ರರಂಗದ ಮಟ್ಟಗೆ ಸಧ್ಯಕ್ಕಂತೂ ಒಂದು ಆಸ್ತಿ..

ಇದು ಎಲ್ಲ ಹಾಡುಗಳಲ್ಲಿ ಅತ್ಯುತ್ತಮ.. ಇದನ್ನು ಬರೆಯುವ ಮೊದಲು ಕನಿಷ್ಟ ಹತ್ತು ಸಲವಾದರೂ ಈ ಹಾಡನ್ನು ಕೇಳಿದ್ದೇನೆ.. ಮತ್ತೂ ಇದರ ಗುಂಗು ಹೋಗಿಲ್ಲ... ಇನ್ನೆಲ್ಲಿ ನನಗೇ ಉಳಿಗಾಲ?


ಅಂಕ - 9.5/10

3. ಆಹಾ ಈ ಬೆದರು ಬೊಂಬೆ - (ಉದಿತ್ ನಾರಾಯಣ್, ಅನುರಾಧಾ ಶ್ರೀರಾಂ) : ಹಾಡಿನ ಆರಂಭಿಕ ಹಿನ್ನೆಲೆ ಸಂಗೀತ ಮತ್ತು ಮೊದಲ ಸಾಲು ಸೊಗಸಾಗಿದೆ.. ಆದರೆ ನಂತರದ ಸಾಲುಗಳು ಮತ್ತು ಚರಣ ಸುಮಾರಾಗಿದೆ ಅಷ್ಟೇ.. ಉದಿತ್ ಇನ್ನೂ ಸ್ವಲ್ಪ ಉತ್ತಮವಾಗಿ ಹಾಡಬಹುದಿತ್ತು.

ಅಂಕ - 7/10

4. ನಧೀಂಧೀಂ ತನನಾ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ(ಚಿತ್ರಾ) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು ಚಿತ್ರಾ ಸುಶ್ರ್ಯಾವ್ಯವಾಗಿ ಹಾಡಿದ್ದಾರೆ..ಅತ್ಯುತ್ತಮ ಸಾಹಿತ್ಯ.

ಅಂಕ - 9/10

5. ಕವಿತೆ (ವಿಜಯ್ ಪ್ರಕಾಶ್) :- Patho Song! ಕರುಣ ರಸ ಭರಿತ ಹಾಡು.. ಸಾಧಾರಣ.
ಅಂಕ - 6/10


6. ಜೀವ ಕಳೆವ (ಸೋನು ನಿಗಂ) - ಮಿಂಚಾಗಿ ನೀನು ಬರಲು ಧಾಟಿಯಲ್ಲೇ ಬರುವ ಹಾಡು.. ಸಾಹಿತ್ಯ ಯೋಗರಜ ಭಟ್ತರದ್ದು. ಆದರೆ ಇಲ್ಲಿ ಸೋನು ಹಲವಾರು ಕಡೆ ಉಚ್ಚಾರದಲ್ಲಿ ಎಡವಿದ್ದಾರೆ. ಅದೂ ಅಲ್ಲದೇ ಸಾಹಿತ್ರದಲ್ಲಿ ಬಳಸಿರುವ ಕೆಲವು ಪದಗಳು ಸಂಗೀತದೊಂದಿಗೆ ಅಷ್ಟಾಗಿ ಹೊಂದದೇ ಇರುವುದು ಗೊತ್ತಾಗುತ್ತದೆ.. ಹಿನ್ನೆಲೆ ಸಂಗೀತ ಮೊದಲ ಹಾಡಿನದ್ದೇ ಆಗಿರುವುದರಿಂದ ಕೇಳಲು ಬಹಳ ಇಂಪಾಗಿಯೇ ಇದೆ..

ಅಂಕ - 7/10


ಒಂದಂತೂ ಸತ್ಯ... ಮುಂಗಾರು ಮಳೆಯ ನಂತರ ಭಾರೀ ನಿರೀಕ್ಷೆಯಲ್ಲಿದ್ದ ಕೇಳುಗರಿಗೆ ಗಾಳಿಪಟಚಿತ್ರದ ಹಾಡುಗಳು ನಿರಾಸೆಯನ್ನಂತೂ ಖಂಡಿತಾ ಮಾಡುವುದಿಲ್ಲ. ಮುಂಗಾರು ಮಳೆ ಮುಂಗಾರು ಮಳೇಯೇ.. ಅದರೊಂದಿಗೆ ಹೋಲಿಸುವುದು ಬೇಡ... ಉತ್ತಮ ಸಂಗೀತ ಪ್ರಿಯರಿಗೆ ಇಲ್ಲಿ ಒಳ್ಳೆಯ ರಸದೌತಣವಂತೂ ಇದೆ.. ಸಾಹಿತ್ಯ ಪ್ರಿಯರಿಗೆ ಜಯಂತ್ ಸೊಗಸಾದ ಸಾಲುಗಳನ್ನು ಬರೆದಿದ್ದಾರೆ.. ಹರಿಕೃಷ್ಣ ಉತ್ತಮವಾಗಿ ಸಂಗೀತ ನೀಡಿದ್ದಾರೆ

4 comments:

Sushrutha Dodderi said...

ಪ್ರಿಯ ಅರುಣ್,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

Supreeth.K.S said...

ನನಗಂತೂ ಕವಿತೆ ಕವಿತೆ ಹಾಡು ತುಂಬಾ ಇಷ್ಟವಾಯಿತು... ಹಳೆಯ ಮುಖೇಶ್ ಹಾಡುಗಳಲ್ಲಿನ ಅಪ್ಯಾಯಮಾನವಾದ ಶೋಕವನ್ನು ನಾನಿಲ್ಲಿ ಅನುಭವಿಸಿದೆ....

......
http://uniquesupri.wordpress.com/

Kannada Sahithya said...

Dear Arun,

On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

ವಿ.ರಾ.ಹೆ. said...

ಓಹ್, ಅರುಣ ಬ್ಗಾಗ್ ! ನೋಡಿ ಖುಷಿಯಾಯಿತು.

ಇದು ವಿಮರ್ಷೆಯೋ ವಿಮರ್ಶೆಯೋ :)