ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ.
ಪುಟ್ಟಣ್ಣನವರ ಒಂದೊಂದು ಚಿತ್ರವೂ ಒಂದೊಂದು ಅನರ್ಘ್ಯ ರತ್ನವಿದ್ದಂತೆ.
ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳನ್ನು ಮತ್ತೊಮ್ಮೆ ನೆನೆದು ಹೆಮ್ಮೆ ಪಡೋಣ........
ಕನ್ನಡ ಚಿತ್ರಗಳು
0 - ಬೆಟ್ಟದ ಹಾದಿ (ಬಿಡುಗಡೆಯಾಗಿಲ್ಲ)
1 ಬೆಳ್ಳಿಮೋಡ - (1966 - ಕಲ್ಪನಾ, ಕಲ್ಯಾಣ್ ಕುಮಾರ್)
2 ಮಲ್ಲಮ್ಮನ ಪವಾಡ (1969 - ಡಾ.ರಾಜ್ ಕುಮಾರ್, ಬಿ.ಸರೋಜಾ ದೇವಿ)
3 ಕಪ್ಪು ಬಿಳುಪು (1969 - ಕಲ್ಪನಾ)
4 ಗೆಜ್ಜೆ ಪೂಜೆ (1969 - (ಕಲ್ಪನಾ, ಗಂಗಾಧರ್, ಲೀಲಾವತಿ)
5 ಕರುಳಿನ ಕರೆ (1970 - ಡಾ.ರಾಜ್ ಕುಮಾರ್, ಕಲ್ಪನಾ)
6 ಸಾಕ್ಷಾತ್ಕಾರ (1971 - ಡಾ.ರಾಜ್ ಕುಮಾರ್, ಜಮುನ, ಪೃಥ್ವಿ ರಾಜ್ ಕಪೂರ್)
7 ಶರಪಂಜರ (1971 - ಕಲ್ಪನಾ, ಗಂಗಾಧರ್)
8 ನಾಗರ ಹಾವು (1972 - ವಿಷ್ಣುವರ್ಧನ್, ಆರತಿ, ಕೆ.ಎಸ್.ಅಶ್ವಥ್, ಜಯಂತಿ)
9 ಎಡಕಲ್ಲು ಗುಡ್ಡದ ಮೇಲೆ (1973 - ಜಯಂತಿ, ಆರತಿ, ಚಂದ್ರಶೇಖರ್)
10 ಉಪಾಸನೆ(1974 - ಆರತಿ, ಸೀತಾರಾಂ)
11 ಕಥಾ ಸಂಗಮ (1975 - ರಜನೀಕಾಂತ್, ಆರತಿ, ಬಿ.ಸರೋಜಾ ದೇವಿ)
12 ಶುಭ ಮಂಗಳ(1975 - ಶ್ರೀನಾಥ್, ಆರತಿ, ಅಂಬರೀಶ್, ಶಿವರಾಂ)
13 ಬಿಳಿ ಹೆಂಡ್ತಿ (1975 - ಆರತಿ, ಅನಿಲ್ ಕುಮಾರ್)
14 ಫಲಿತಾಂಶ(1976 -ಆರತಿ, ಜೈ ಜಗದೀಶ್)
15 ಕಾಲೇಜು ರಂಗ (1976 - ಕಲ್ಯಾಣ್ ಕುಮಾರ್, ಜಯಸಿಂಹ, ಲೋಕನಾಥ್, ಲೀಲಾವತಿ)
16 ಪಡುವಾರ ಹಳ್ಳಿ ಪಾಂಡವರು (1978 - ಅಂಬರೀಶ್, ಜೈ ಜಗದೀಶ್, ರಾಮಕೃಷ್ಣ, ಆರತಿ)
17 ಧರ್ಮಸೆರೆ (1979 - ಶ್ರೀನಾಥ್, ಆರತಿ)
18 ರಂಗನಾಯಕಿ (1981 - ಆರತಿ, ಅಶೋಕ್, ರಾಮಕೃಷ್ಣ, ಅಂಬರೀಶ್, ರಾಜಾನಂದ್)
19 ಮಾನಸ ಸರೋವರ (1983 - ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ)
20 ಧರಣಿ ಮಂಡಲ ಮಧ್ಯದೊಳಗೆ (1983 - ಶ್ರೀನಾಥ್, ಚಂದ್ರಶೇಖರ್, ರಾಮಕೃಷ್ಣ, ಟಿ.ಎನ್.ಸೀತಾರಾಂ)
21 ಅಮೃತ ಘಳಿಗೆ (1984 - ಶ್ರೀಧರ್, ಪದ್ಮಾವಾಸಂತಿ, ರಾಮಕೃಷ್ಣ)
22 ಋಣ ಮುಕ್ತಳು(1984 - ಭಾರತಿ, ಎಸ್.ಕೆ.ಅರಸ್,ರಾಮಕೃಷ್ಣ)
23 ಮಸಣದ ಹೂವು (1984 - ಅಂಬರೀಶ್, ಜಯಂತಿ, ಅಪರ್ಣಾ)
24 ಸಾವಿರ ಮೆಟ್ಟಿಲು (1967/2006 - ಕಲ್ಯಾಣ್ ಕುಮಾರ್, ವಜ್ರಮುನಿ, ಜಯಂತಿ, ಪಂಡರಿ ಬಾಯಿ, ಅಂಬರೀಶ್, ಅನು ಪ್ರಭಾಕರ್, ರಾಮಕೃಷ್ಣ, ಸುಂದರ್ ರಾಜ್, ಮಾ.ಹಿರಣ್ಣಯ್ಯ)
(1967 ರಲ್ಲಿ ಆರಂಭಗೊಂಡು ಅರ್ಧಕ್ಕೇ ನಿಂತಿದ್ದ ಚಿತ್ರವನ್ನು 38 ವರ್ಷಗಳ ನಂತರ ಅಂದರೆ, 2006ರಲ್ಲಿ ಕೆ.ಎಸ್.ಎಲ್.ಸ್ವಾಮಿ ಅವರಿಂದ ಪೂರ್ಣಗೊಳಿಸಿದರು)
ಹಿಂದಿ ಚಿತ್ರಗಳು 1. ಝಹ್ರೀಲಾ ಇನ್ಸಾನ್ (1974 - ರಿಶಿ ಕಪೂರ್, ನೀತು ಸಿಂಗ್; ನಾಗರ ಹಾವು ಚಿತ್ರದ ರೀಮೇಕ್)
2. ಹಂ ಪಾಂಚ್ (1981 - ಮಿಥುನ್ ಚಕ್ರವರ್ತಿ; ಪಡುವಾರಹಳ್ಳಿ ಪಾಂಡವರು ಚಿತ್ರದ ರೀಮೇಕ್)
ತಮಿಳು ಚಿತ್ರಗಳು1. ಇರುಲುಂ ಒಲಿಯಂ
2. ಟೀಚರಮ್ಮಾ ತೇವಿಡಿಯಾ
3. ಸುದರುಂ ಸೂರವಲಿಯುಂ
ಮಲಯಾಳಂ ಚಿತ್ರ1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)
Friday, 13 July 2007
Subscribe to:
Post Comments (Atom)
1 comment:
ವಿವರಗಳಿಗೆ ಧನ್ಯವಾದಗಳು
ಮಲಯಾಳಂನ್ನಲ್ಲಿ ಕನ್ನಡದ 'ಸ್ಕೂಲ್ ಮಾಸ್ಟರ್ ಚಿತ್ರವನ್ನು ನಿರ್ದೇಶಿಸಿದರು, ಅದೇ ಅವರ ಮೊದಲ ಚಿತ್ರ ಅಂತ ಓದಿದ ನೆನಪು .....
ಅರುಣ್ ಕುಮಾರ್ ಬಿ.ಎಸ್
Post a Comment